ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಚಿಕ್ಕೋನಹಳ್ಳಿಪಾಳ್ಯ ಗ್ರಾಮದ ನಿವಾಸಿ ದಿವ್ಯಾಶ್ರೀ ಅವರ ತಂದೆ ಸಿ.ಜಿ.ಲೋಕೇಶ್ ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶಿಕ್ಷಣ ಇಲಾಖೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆಸಿದ ಹಲವು ಸ್ಪರ್ಧೆಗಳಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ದಿವ್ಯಾಶ್ರೀ ರಾಜ್ಯಮಟ್ಟಕ್ಕೆ ತಲುಪಿದ್ದಾರೆ.
ಸಿ.ಎಲ್.ದಿವ್ಯಾಶ್ರೀ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ನಾನ ಪಡೆದು 15 ಸಾವಿರ ನಗದು ನಂತರ ಜಿಲ್ಲಾ ಮಟ್ಟದಲೂ ಕೂಡ ಪ್ರಥಮ ಸ್ಥಾನ ಪಡೆದು 25 ಸಾವಿರ ನಗದು ಬಹುಮಾನ ಗಳಿಸಿ ನಂತರ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ





